ವಿಕೆಂಡ್ ವಿತ್ ರಮೇಶ್, ಲೈಫ್ ಸೂಪರ್ ಗುರು ದಂತಹ ವಿಭಿನ್ನ ಶೋಗಳು, ವೀಕ್ಷಕರು ಇಷ್ಟಪಡುವ ಧಾರವಾಹಿಗಳನ್ನು ಪ್ರಸಾರ ಮಾಡುತ್ತಿರುವ ಜೀ ವಾಹಿನಿ ಈಗ ಒಂಬತ್ತರ ಹರೆಯ. ಇದರನ್ವಯ ಪಂಚತಾರ ಹೋಟೆಲ್ನಲ್ಲಿ ಸಣ್ಣದೊಂದು ಸಂತೋಷಕೂಟ. ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರಹುಣಸೂರು ಕೋರಿಕೆ ಮೇರೆಗೆ ಆಗಮಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಕೇಕ್ನ್ನು ಕತ್ತರಿಸಿ ತಮ್ಮ ಲೋಕಲ್ ಭಾಷೆಯಲ್ಲಿ ಈ ರೀತಿ ಹೇಳಿ ತಂಡಕ್ಕೆ ಶುಭ ಹಾರೈಸಿದರು. ಒಂಬತ್ತು ವರ್ಷದಿಂದ ಏನು ಕಿಸಿದಿದ್ದೀರಾ ಅನ್ನುವುದು ಮುಖ್ಯವಲ್ಲ. ಇನ್ನು ಮುಂದೆ ಏನು ಕಿಸಿತೀರಾ ಎಂಬುದು ಮುಖ್ಯ. ಸಾಂಗಿಕವಾಗಿ ಮಾಡೋ ಕೆಲಸಕ್ಕೆ ಚಪ್ಪಾಳೆ ಬಂದಿದೆ. ಇನ್ನು ಮುಂದೆ ನಂಬರ್ ಒನ್ ಚಾನಲ್ ಎನಿಸಿಕೊಳ್ಳಲು ಟಾರ್ಗಟ್ ಆಗಬಾರದು. ಗುರಿ ಮುಖ್ಯ ಎಂದರು.
ತಡವಾಗಿ ಆಗಮಸಿದ ರಮೇಶ್ ರಾಮಶಾಮಭಾಮ ಬಿಡುಗಡೆ ಸಂದರ್ಭದಲ್ಲಿ ಜೀ ವಾಹಿನಿ ಶುರುವಾಗಿತ್ತು. ವಿಕೆಂಡ್ ವಿತ್ ರಮೇಶ್ ಶೋಗೆ ಈ ವಾರದ ಸಾಧಕ ಜೀ ವಾಹಿನಿ ಅಂತ ತಂಢಕ್ಕೆ ಹೇಳಿ ಎಲ್ಲರಿಗೂ ಚಾರ್ಮ್ ತುಂಬಿದರು. ಜೀ ತಂಡದವರು ಶಾಂಪೈನ್ ಬಾಟಲ್ ತೆರೆಯುವದರೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು.